ಮಾರ್ಕೋನಹಳ್ಳಿ ಆಣೆಕಟ್ಟು


Contributors to Wikimedia projects

Article Images

ಮಾರ್ಕೋನಹಳ್ಳಿ ಆಣೆಕಟ್ಟು

ಮಾರ್ಕೋನಹಳ್ಳಿ ಅಣೆಕಟ್ಟು ಒಂದು ಸುಂದರವಾದ ಅಣೆಕಟ್ಟು ಮತ್ತು ತುಮಕೂರು ನಗರದ ಅತ್ಯಂತ ಆಕರ್ಷಕ ಪ್ರವಾಸಿ ಸ್ಥಳ. ಮಾರ್ಕೋನಹಳ್ಳಿ ಅಣೆಕಟ್ಟು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಶಿಂಷಾ ನದಿಯ ಅಡ್ಡಲಾಗಿ ನಿರ್ಮಿಸಿದ ಅಣೆಕಟ್ಟು. ಈ ಅಣೆಕಟ್ಟೆಯನ್ನು ೧೯೪೨ರಲ್ಲಿ ಮೈಸೂರು ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ತನ್ನ ದಿವಾನರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯರವರ ಮಾರ್ಗದರ್ಶನದಲ್ಲಿ ಕಟ್ಟಿಸಿದರು. ಅಣೆಕಟ್ಟು ಸುಮಾರು 4000 ಹಳ್ಳಿಗಳ ಕೃಷಿಗೆ ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಶಿಂಷಾ ನದಿ ಕಾವೇರಿ ನದಿಯ ಉಪನದಿ ಮತ್ತು ತುಮಕೂರು ಜಿಲ್ಲೆಯ ಮೂರು ನದಿಗಳಲ್ಲಿ ಒಂದು. ಇದು 6070 ಹೆಕ್ಟೇರ್ ಭೂಮಿಗೆ ನೀರಾವರಿ ಉಣಿಸುತ್ತದೆ. ಅಣೆಕಟ್ಟೆಯು 139 ಮೀಟರ್ ಉದ್ದದ ಒಂದು ಗಾರೆ ರಚನೆ ಹೊಂದಿದೆ. ಜಲಾಶಯವು ಸುಮಾರು 4,103 (1,584 ಮೈಲಿ)ಕಿ.ಮೀನ ಸಂಗ್ರಹಣಾ ಪ್ರದೇಶ ಹೊಂದಿದೆ ಮತ್ತು ಸಮುದ್ರಮಟ್ಟದಿಂದ ಸರಾಸರಿ ಸುಮಾರು 731,57 ಮೀ ಎತ್ತರದಲ್ಲಿದೆ. ಜಲಾಶಯವು 68 ದಶಲಕ್ಷ ಘನ ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

ಮಾರ್ಕೋನಹಳ್ಳಿ ಆಣೆಕಟ್ಟು

ಜಾಲತಾಣfile:/I:/marconahally-dam.html

ಮಾರ್ಕೋನಹಳ್ಳಿ ಜಲಾಶಯದಲ್ಲಿ ವಾಣಿಜ್ಯ ಮೀನುಗಳು ಮತ್ತು 13 ಜಾತಿಗಳ ಮೀನುಗಳಿವೆ. ಪ್ರಬಲ ಜಾತಿಗಳಾದ ಪುನ್ತಿಸ್ ಇಲ್ಲಿ ಕಂಡು ಬರುತ್ತವೆ. ಸಿರ್ರ್ಹಿನುಸ್ ರೇಬಾ ಮತ್ತು ಳಬೆಒ ಕ್ಯಾಲ್ಬಸು ಮತ್ತು ಇತರ ಕಸಿ ಕಾರ್ಪ್ ಮತ್ತು ಸಿಹಿನೀರು ಮೀನುಗಳು ಕೂಡ ಇಲ್ಲಿ ಕಾಣಬಹುದು. ಇದು ಏಷ್ಯಾದ ಮೊಟ್ಟ ಮೊದಲ ಸ್ವಯಂಚಾಲಿತ ಸೈಫನ್ ವ್ಯವಸ್ಥೆಯನ್ನು ಹೊಂದಿದೆ. ನೀರಿನ ಒಳಹರಿವು ಹೆಚ್ಚಳವಾದಾಗ ಮತ್ತು ನೀರಿನ ಮಟ್ಟ 88ಅಡಿ ತಲುಪಿದಾಗ, ಹೆಚ್ಚುವರಿ ನೀರು ಸ್ವಯಂಚಾಲಿತ ಬಾಗಿಲುಗಳ ಮೂಲಕ ಅಣೆಕಟ್ಟಿನ ಹೊರಗೆ ಹೋಗುತ್ತದೆ. ಬಾಗಿಲುಗಳನ್ನು ತೆರೆಯಲು ಯಾವುದೇ ವ್ಯಕ್ತಿಯ ಅಗತ್ಯವಿಲ್ಲ.

ಮಾರ್ಕೋನಹಳ್ಳಿ ಅಣೆಕಟ್ಟೆಯನ್ನು ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ತಮ್ಮ ದಿವಾನರೂ ಮತ್ತು ಸಿವಿಲ್ ಎಂಜಿನಿಯರರೂ ಆಗಿದ್ದ ದಿವಾನ್ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯರವರ ಮಾರ್ಗದರ್ಶನದಲ್ಲಿ ೧೯೪೨ರಲ್ಲಿ ಕಟ್ಟಿಸಿದರು. ಈ ಅಣೆಕಟ್ಟೆಯು ಏಷ್ಯಾದ ಮೊಟ್ಟ ಮೊದಲ ಸ್ವಯಂಚಾಲಿತ ಸೈಫನ್ ವ್ಯವಸ್ಥೆಯನ್ನು ಹೊಂದಿದೆ.

  • ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬೆಂಗಳೂರಿನಿಂದ ೨೮ ಕಿಮೀ ಕ್ರಮಿಸಿದ ನಂತರ ನೆಲಮ೦ಗಲದಲ್ಲಿ ಎಡಕ್ಕೆ ತಿರುಗಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸಬೇಕು. ಅಲ್ಲಿಂದ ಮುಂದೆ ೪೪ ಕಿಮೀ ಕ್ರಮಿಸಿದ ನಂತರ ಕುಣಿಗಲ್ ತಾಲೂಕಿನಲ್ಲಿ ಈ ಜಲಾಶಯವಿದೆ.
  • ಹತ್ತಿರದ ರೈಲ್ವೆ ನಿಲ್ದಾಣ: ಬೆಂಗಳೂರಿನಿ೦ದ ತುಮಕೂರಿಗೆ
  • ಹತ್ತಿರದ ವಿಮಾನ ನಿಲ್ದಾಣ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು
  • ರಸ್ತೆ ಸಾರಿಗೆ: ಬೆಂಗಳೂರು / ಬೆಂಗಳೂರಿನಿಂದ 93km ಕುಣಿಗಲ್

ಕರ್ನಾಟಕ ರಾಜ್ಯದಲ್ಲಿ ಹರಿಯುವ ಒಂದು ನದಿ. ಇದು ದಕ್ಷಿಣ ಭಾರತದ ಪ್ರಮುಖ ನದಿಗಳಲಿ ಒಂದು ಮತ್ತು ಕಾವೇರಿ ನದಿಯ ಉಪನದಿ. ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟದ ದಕ್ಷಿಣ ಭಾಗದಲ್ಲಿ ಹುಟ್ಟುತ್ತದೆ ಮತ್ತು 221 ಕಿಮೀ (137 ಮೈಲಿ)ಹರಿದು ಕಾವೇರಿ ನದಿಯನ್ನು ಸೇರುತ್ತದೆ. ಶಿಂಷಾ ನದಿಯು ದೇವರಾಯನದುರ್ಗ ಬೆಟ್ಟದಲ್ಲಿ 914 ಮೀ ಎತ್ತರದಲ್ಲಿ ಹುಟ್ಟುತ್ತದೆ. ದೇವರಾಯನದುರ್ಗವು ನರಸಿಂಹ ದೇವರ ಸ್ಥಾನ. ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ನಂತರ, ನದಿಯು ದಕ್ಷಿಣ ದಿಕ್ಕಿಗೆ ಹರಿಯುತ್ತದೆ ಮತ್ತು ಮಂಡ್ಯ ಜಿಲ್ಲೆ ಪ್ರವೇಶಿಸುತ್ತದೆ. ಮಂಡ್ಯ ಜಿಲ್ಲೆಯಲ್ಲಿ ನದಿಯು ದಕ್ಷಿಣ ಪೂರ್ವ ದಿಕ್ಕಿನಲ್ಲಿ ಹರಿದು ಮಳವಳ್ಳಿ ತಾಲೂಕಿನ ಶಿಂಷಾಪುರ ಜಲಪಾತದಲ್ಲಿ ಧುಮುಕಿ ಮುಂದೆ ಕಾವೇರಿ ನದಿಯನ್ನು ಕೂಡುತ್ತದೆ. ನದಿಯ ಒಟ್ಟು ಉದ್ದ 221 ಕಿಮೀ (137 ಮೈಲಿ) ಆಗಿರುತ್ತದೆ.

  • ಎಡೆಯೂರು - 7 ಕಿಮೀ
  • ಕುಣಿಗಲ್ ಸ್ಟಡ್ ಫಾರ್ಮ್ (ಕುದುರೆ ತಳಿ ಫಾರ್ಮ್, ವಿಜಯ್ ಮಲ್ಯ ಒಡೆತನದ್ದು)
  • ಕುಣಿಗಲ್ ಕೆರೆ (ಜಾನಪದ ಹಾಡಿನ ’ಮೂಡಲ್ ಕುಣಿಗಲ್ ಕೆರೆ' ಮೂಲಕ ಪ್ರಸಿದ್ಧ)
  • ದೀಪಾಂಬುಧಿ ಜಲಾಶಯ - 26 ಕಿಮೀ
  • ಹುಲಿಯೂರು ದುರ್ಗ - ವಿಹಾರತಾಣ ಹಾಗೂ ಸಣ್ಣ ಚಾರಣ ತಾಣ - 22 ಕಿಮೀ.

ಶಿಂಷಾ ನದಿಯು ಮಳವಳ್ಳಿ ತಾಲೂಕಿನಲ ಶಿಂಷಾಪುರದಲ್ಲಿ ಒಂದು ಜಲಪಾತವನ್ನು ಹೊಂದಿದೆ. ಇದು 17.200 ಕಿಲೋವ್ಯಾಟ್ ಅನುಸ್ಥಾಪಿತ ಸಾಮರ್ಥ್ಯ ಹೊಂದಿರುವ ಶಿಂಷಾ ಜಲ ನೀರಾವರಿ ಯೋಜನೆಯ ಸ್ಥಳವಾಗಿದೆ. ಇದು ಏಷ್ಯಾದ ಮೊದಲ ಜಲ ವಿದ್ಯುತ್ ಯೋಜನೆ. ಕೋಲಾರ ಚಿನ್ನದ ಗಣಿಗೆ ಇಲ್ಲಿಂದ 1902ರಲ್ಲಿ ವಿದ್ಯುತ್ ಸರಬರಾಜು ಮಾಡಲಾಯಿತು (ಈ ವಿವರದ ಪರಾಮರ್ಶನೆ ಅಗತ್ಯವಿದೆ).