ವಿಜಯನಗರ ಜಿಲ್ಲೆ


Contributors to Wikimedia projects

Article Images

ವಿಜಯನಗರ ಜಿಲ್ಲೆ

ಕರ್ನಾಟಕ ರಾಜ್ಯದ ಒಂದು ಜಿಲ್ಲೆ

ವಿಜಯನಗರ ಜಿಲ್ಲೆ ಭಾರತದ, ಕರ್ನಾಟಕ ರಾಜ್ಯದ ೩೧ನೇ ಜಿಲ್ಲೆ, ಇದು ಕಲ್ಯಾಣ -ಕರ್ನಾಟಕ ಪ್ರದೇಶದಲ್ಲಿದೆ. ಈ ಪ್ರದೇಶವನ್ನು ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕಿಸಿ ಹೊಸ ಜಿಲ್ಲೆಯಾಗಿಸಲಾಯಿತು. [] [] ೨ನೇ ಅಕ್ಟೋಬರ್ ೨೦೨೧ ರಂದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಹೊಸ ಜಿಲ್ಲೆಯನ್ನು ಘೋಷಿಸಿದರು []

ವಿಜಯನಗರ ಜಿಲ್ಲೆ

ಕರ್ನಾಟಕ ರಾಜ್ಯದ ಒಂದು ಜಿಲ್ಲೆ

Hampi Bazaar from Matanga Hill, Kalleshwara Temple Temple at Bagali, Temples on Hemakuta Hill, Tungabhadra Dam, Kalleshwara Temple at Hirehadagalli

ಕರ್ನಾಟಕದ ನಕ್ಷೆಯಲ್ಲಿ ವಿಜಯನಗರ

ಕರ್ನಾಟಕದ ನಕ್ಷೆಯಲ್ಲಿ ವಿಜಯನಗರ

ದೇಶ ಭಾರತ
ರಾಜ್ಯ ಕರ್ನಾಟಕ
ವಿಭಾಗಕಲಬುರಗಿ
ಸ್ಥಾಪನೆ2 ಅಕ್ಟೋಬರ್ 2021
(1095 ದಿನ ಗಳ ಹಿಂದೆ)
Named forವಿಜಯನಗರ ಸಾಮ್ರಾಜ್ಯ
ಕೇಂದ್ರಹೊಸಪೇಟೆ
ತಾಲೂಕುಗಳು
Government
 • Bodyವಿಜಯನಗರ ಜಿಲ್ಲಾ ಪಂಚಾಯತ್
 • ಜಿಲ್ಲಾಧಿಕಾರಿಎಮ್. ಎಸ್. ದಿವಾಕರ
 • ಪೊಲೀಸ್ ವರಿಷ್ಠಾಧಿಕಾರಿಶ್ರೀಹರಿಬಾಬು ಬಿ ಎಲ್
 • ಮುಖ್ಯ ಕಾರ್ಯನಿರ್ವಹಣಾಧಿಕಾರಿಸದಾಶಿವ ಪ್ರಭು ಬಿ
Area
 • Total೪,೨೫೨ km (೬೪೨ sq mi)
Elevation೪೪೯ m (೧,೪೭೩ ft)
Population

 (೨೦೧೧)

 • Total೧೩೫೩೬೨೮
 • Density೩೨೦/km (೨,೧೦೦/sq mi)
ಭಾಷೆ
 • ಅಧೀಕೃತಕನ್ನಡ
Time zoneUTC+5:30 ((ಭಾರತೀಯ ಸಮಯ))
Telephone codeಹೊಸಪೇಟೆ ೦೮೩೯೪
Vehicle registrationಕೆ‌ಎ-೩೫
Websitevijayanagara.nic.in

ಐತಿಹಾಸಿಕವಾಗಿ ಇದು ವಿಜಯನಗರ ಸಾಮ್ರಾಜ್ಯದ ಹಿಂದಿನ ರಾಜಧಾನಿಯಾಗಿತ್ತು ಹಂಪಿ ಮತ್ತು ವಿರೂಪಾಕ್ಷ ದೇವಸ್ಥಾನದ ಎಲ್ಲಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ . [] []

ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ವಿಜಯನಗರವು, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿತ್ತು. ಭಾರತದ ಸ್ವಾತಂತ್ರ್ಯದ ನಂತರ ರಾಜ್ಯಗಳ ರಚನೆಯ ಸಮಯದಲ್ಲಿ, ೧೯೫೩ರಲ್ಲಿ ಆಂಧ್ರಪ್ರದೇಶ ರಾಜ್ಯ ಅಸ್ತಿತ್ವಕ್ಕೆ ಬಂದಾಗ , ಈ ಪ್ರದೇಶವು ಮೈಸೂರು ರಾಜ್ಯದ ಬಳ್ಳಾರಿ ಜಿಲ್ಲೆಯ ಭಾಗವಾಗಿ ಸೇರ್ಪಡೆಗೊಂಡಿತು. ಪ್ರಸ್ತುತ ಈ ಜಿಲ್ಲೆಯು ಹೈದರಾಬಾದ್-ಕರ್ನಾಟಕ ಪ್ರದೇಶದ ಅಡಿಯಲ್ಲಿ ಬರುತ್ತದೆ,

೨೦೨೦ರಲ್ಲಿ ಬಳ್ಳಾರಿ ಜಿಲ್ಲೆಯಿಂದ ಆರು ತಾಲ್ಲೂಕುಗಳನ್ನು ಬೇರ್ಪಡಿಸಿ, ವಿಜಯನಗರ ಜಿಲ್ಲೆ ಎಂಬ ಹೆಸರಿನಲ್ಲಿ ಒಂದುಗೂಡಿಸಲಾಯಿತು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರವು ೧೮ನೇ ನವೆಂಬರ್ ೨೦೨೦ರಂದು ಈ ಜಿಲ್ಲೆಯ ರಚನೆಗೆ ಅನುಮೋದನೆ ನೀಡಿ ಅಧಿಸೂಚನೆ ಹೊರಡಿಸಿತು.

ಸಂಸತ್ತು ಮತ್ತು ವಿಧಾನಸಭೆ ಸ್ಥಾನಗಳು

ಬದಲಾಯಿಸಿ

ವಿಜಯನಗರ ಜಿಲ್ಲೆಯು ಬಳ್ಳಾರಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ, (ಎಸ್‍ಟಿ ವರ್ಗಕ್ಕೆ ಮೀಸಲಾಗಿದೆ) ಮತ್ತು ೫ ವಿಧಾನಸಭಾ ಸ್ಥಾನಗಳನ್ನು ಹೊಂದಿದೆ:

  • 88. ಹೂವಿನಹಡಗಲಿ (SC)
  • 89. ಹಗರಿಬೊಮ್ಮನಹಳ್ಳಿ (SC)
  • 90 ವಿಜಯನಗರ (ಸಾಮಾನ್ಯ)
  • 96. ಕುಡ್ಲಿಗಿ (ಎಸ್ಟಿ)
  • 104. ಹರಪನಹಳ್ಳಿ (ಸಾಮಾನ್ಯ)

ಹರಪನಹಳ್ಳಿಯ ವಿಧಾನಸಭಾ ಕ್ಷೇತ್ರವು ದಾವಣಗೆರೆಯ ಸಂಸದೀಯ ಕ್ಷೇತ್ರದ ಭಾಗವಾಗಿದೆ.

  • ಹಂಪಿ : ವಿಜಯನಗರದ ಅವಶೇಷಗಳಿಗೆ ಹೆಸರುವಾಸಿಯಾಗಿದೆ ವಿಶ್ವ ಪರಂಪರೆಯ ತಾಣವಾಗಿದ್ದು, ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ.
  • ಮೈಲಾರ : ಮೈಲಾರಲಿಂಗೇಶ್ವರ ದೇವಸ್ಥಾನವು ಈಶ್ವರನಿಗೆ (ಮೈಲಾರ ರಾಜವಂಶ) ಮೀಸಲಾಗಿರುವ ಹಿಂದೂ ದೇವಾಲಯವಾಗಿದೆ.
  • ಅಂಕ ಸಮುದ್ರ ಪಕ್ಷಿಧಾಮ : ಇದು ಹಗರಿಬೊಮ್ಮನಹಳ್ಳಿ ತಾಲೂಕಿಗೆ ಸಂಬಂಧಿಸಿದ್ದು, ಉಪನಾಯಕನಹಳ್ಳಿಯಿಂದ 2 ಕೀ.ಮಿ ದೂರದ ಅಂಕಸಮುದ್ರ ಎಂಬ ಹಳ್ಳಿಗೆ ಸೇರಿದೆ. ವಿದೇಶಗಳಿಂದ ಪಕ್ಷಿಗಳು ಇಲ್ಲಿ ವಲಸೆ ಬರುತ್ತವೆ.
  • ಹಂಪಿಯಲ್ಲಿರುವ ಸಂಶೋಧನಾ-ಆಧಾರಿತ ಸಾರ್ವಜನಿಕ ವಿಶ್ವವಿದ್ಯಾಲಯವಾದ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವ ಮತ್ತು ಅದರ ಸಾಹಿತ್ಯ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುವ ಗುರಿಯೊಂದಿಗೆ ಸ್ಥಾಪಿತವಾಗಿದೆ.
  1. "Cabinet approves boundaries of Vijayanagara district". The Hindu (in Indian English). 28 November 2020. Retrieved 24 January 2021.
  2. "Vijayanagar to be Karnataka's 31st district, BSY Cabinet gives in-principle nod". The New Indian Express. 19 November 2020. Retrieved 24 January 2021.
  3. "Chief Minister Basavaraj Bommai officially announced the new district". Hospet.online. Hosapete, India. 2 October 2021.
  4. "Karnataka formalises creation of new Vijayanagara district". The Economic Times. 27 November 2020. Retrieved 24 January 2021.
  5. Buradikatti, Kumar (19 November 2020). "Ballari set to lose Hampi and more". The Hindu (in Indian English). Retrieved 24 January 2021.